Read Time:5 Minute, 10 Second
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023–24ರ ಆರ್ಥಿಕ ಸಮೀಕ್ಷೆಯ ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹಾಗೂ ಅವರ ತಂಡ ಸಿದ್ಧಪಡಿಸಿದೆ. ಸಮೀಕ್ಷೆಯ ಮುಖ್ಯಾಂಶಗಳು ಹೀಗಿವೆ.
- 2023–24ನೇ ಸಾಲಿನ ಆರ್ಥಿಕ ವೃದ್ಧಿದರ ಶೇ 8.2ಕ್ಕೆ ಹೋಲಿಸಿದಲ್ಲಿ 2025ರಲ್ಲಿ ಬೆಳವಣಿಗೆ ದರ ಶೇ 6.5ರಿಂದ 7ರಷ್ಟು ಇರಲಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮುಂದುವರಿದಿರುವುದು ರಾಜಕೀಯ ಹಾಗೂ ನೀತಿ ನಿರಂತರತೆಯನ್ನು ಸೂಚಿಸುತ್ತದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
- ಅನಿಶ್ಚಿತ ಜಾಗತಿಕ ಆರ್ಥಿಕ ಕಾರ್ಯಕ್ಷಮತೆಯ ಹೊರತಾಗಿಯೂ FY24 ರಲ್ಲಿ ದೇಶೀಯ ಬೆಳವಣಿಗೆಯ ವಾಹಕಗಳು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಿವೆ
- ಭೌಗೋಳಿಕ ರಾಜಕೀಯ ಸವಾಲುಗಳ ಮೂಲಕ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವ ಭಾರತೀಯ ಆರ್ಥಿಕತೆಯು ಬಲವಾದ ಹೆಜ್ಜೆಗಳನ್ನಿಡುತ್ತಿದೆ
- ಕೋವಿಡ್ ನಂತರದ ಆರ್ಥಿಕ ಚೇತರಿಕೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿನ ಭಾರಿ ಬೆಳವಣಿಗೆ ಆರ್ಥಿಕತೆಗೆ ಸಹಕಾರಿಯಾಗಿದೆ.
- ವ್ಯಾಪಾರ, ಹೂಡಿಕೆ ಹಾಗೂ ಹವಾಮಾನ ವಿಷಯದಲ್ಲಿ ಪ್ರಮುಖ ಜಾಗತಿಕ ಸಮಸ್ಯೆಗಳಲ್ಲಿನ ಒಪ್ಪಂದಗಳು ಬಹಳಷ್ಟು ಸಮಸ್ಯೆ ಸೃಷ್ಟಿಸಿವೆ.
- ಅಲ್ಪಕಾಲಿಕ ಹಣ ದುಬ್ಬರವು ಆರಂಭವಾಗಿದೆ. ಆದರೆ ಭಾರತದಲ್ಲಿ ಬೇಳೆಕಾಳುಗಳ ಇಳುವರಿ ಕುಸಿದು ಬೆಲೆ ಏರಿಕೆ ಬಿಸಿ ತಟ್ಟಿದೆ.
- ಸಾಮಾನ್ಯ ಮುಂಗಾರು ನಿರೀಕ್ಷಿಸಲಾಗಿದೆ ಹಾಗೂ ಆಮದು ಪ್ರಮಾಣ ತಗ್ಗುವ ಸಾಧ್ಯತೆ ಇದೆ. ಆರ್ಬಿಐನಿಂದ ಹಣದುಬ್ಬರಕ್ಕೆ ಪೂರಕವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ
- ಬಡವರು ಹಾಗೂ ಕಡಿಮೆ ಆದಾಯ ಹೊಂದಿರುವ ಗ್ರಾಹಕರು ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ಇವುಗಳನ್ನು ನೇರ ಲಾಭ ವರ್ಗಾವಣೆ ಅಥವಾ ಸರಿಯಾದ ಅವಧಿಗೆ ಮಾನ್ಯವಾದ ನಿರ್ದಿಷ್ಟ ಖರೀದಿಗಳಿಗೆ ಕೂಪನ್ಗಳ ಮೂಲಕ ನಿರ್ವಹಿಸಬಹುದು.
- ಆಹಾರ ಪದಾರ್ಥಗಳನ್ನು ಹೊರತುಪಡಿಸಿ ಭಾರತದ ಹಣದುಬ್ಬರ ಗುರಿಯ ಚೌಕಟ್ಟು ಹಣದುಬ್ಬರ ದರವನ್ನು ಗುರಿಯಾಗಿಸುತ್ತದೆಯೇ ಎಂಬುದನ್ನು ಅನ್ವೇಷಿಸುವ ಮಾರ್ಗಗಳನ್ನು ಸಮೀಕ್ಷೆಯಲ್ಲಿ ಸಲಹೆಯಾಗಿ ನೀಡಲಾಗಿದೆ.
- ಭೌಗೋಳಿಕ ರಾಜಕೀಯ ಘರ್ಷಣೆಗಳ ಉಲ್ಬಣ ಮತ್ತು ಅದರ ಪರಿಣಾಮವು RBI ನ ಹಣಕಾಸು ನೀತಿಯ ನಿಲುವಿನ ಮೇಲೆ ಪ್ರಭಾವ ಬೀರಬಹುದು ಎಂದು ಸಮೀಕ್ಷೆ ಹೇಳಿದೆ.
- ಭಾರತದ ಹಣಕಾಸು ಕ್ಷೇತ್ರದ ಭವಿಷ್ಯ ಉಜ್ವಲವಾಗಿದೆ ಎಂದು ಸಮೀಕ್ಷೆ ಹೇಳಿದೆ.
- ಹಣಕಾಸಿನ ವಲಯವು ನಿರ್ಣಾಯಕ ಹಂತದಲ್ಲಿದ್ದು, ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಸೃಷ್ಟಿಯಾಗುವ ದುರ್ಬಲತೆಗಳ ಸಾಧ್ಯತೆಯ ದುರ್ಬಲತೆಗಳಿಗೆ ಸಿದ್ಧರಾಗಲು ಎಚ್ಚರಿಕೆ ನೀಡಲಾಗಿದೆ.
- ಖಾಸಗಿ ವಲಯ ಹಾಗೂ ಬ್ಯಾಂಕ್ಗಳ ಹಣಕಾಸು ಸ್ಥಿತಿಯ ಆರೋಗ್ಯ ಸ್ಥಿತಿಯಲ್ಲಿದ್ದು, ಇದು ಇನ್ನಷ್ಟು ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಆರ್ಥಿಕ ಸಮೀಕ್ಷೆ 2023–24ರಲ್ಲಿ ಹೇಳಲಾಗಿದೆ.
- ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಭಾರತದ ನೀತಿಗಳು ಬೆಲೆ ಸ್ಥಿರತೆಯನ್ನು ಖಾತ್ರಿಪಡಿಸುವ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
- ತೆರಿಗೆ ಅನುಸರಣೆಯ ಲಾಭಗಳು, ಖರ್ಚು ತಡೆ ಮತ್ತು ಡಿಜಟಲೀಕರಣವು ಭಾರತ ಸರ್ಕಾರದ ಹಣಕಾಸಿನ ನಿರ್ವಹಣೆಯಲ್ಲಿ ಉತ್ತಮ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ
- ಬಂಡವಾಳ ಮಾರುಕಟ್ಟೆಯು ಭಾರತದ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಭೌಗೋಳಿಕ ರಾಜಕೀಯ ಘರ್ಷಣೆಗಳ ಉಲ್ಬಣವನ್ನು ಸಮರ್ಥವಾಗಿ ಎದುರಿಸುತ್ತಿದೆ
- ಕೃತಕ ಬುದ್ಧಿಮತ್ತೆಯು ಎಲ್ಲಾ ಕೌಶಲ ಉದ್ಯಮ ಕ್ಷೇತ್ರಗಳಲ್ಲಿ ಕಾರ್ಮಿಕರ ಮೇಲೆ ಪ್ರಭಾವ ಬೀರಿದೆ
- ಚೀನಾದಿಂದ ವಿದೇಶಿ ಬಂಡವಾಳ ಹೂಡಿಕೆಯು ಹೆಚ್ಚಿನ ಪ್ರಮಾಣದಲ್ಲಿದ್ದು, ಜಾಗತಿಕ ಪೂರಕ ಸರಪಳಿ ಹಾಗೂ ರಫ್ತು ಕ್ಷೇತ್ರದಲ್ಲಿ ಭಾರತಕ್ಕೆ ನೆರವಾಗಲಿದೆ.
- ಅನಾರೋಗ್ಯಕರ ಆಹಾರದಿಂದಾಗಿ ಶೇ 54ರಷ್ಟು ಕಾಯಿಲೆಗಳು ದೇಶಕ್ಕೆ ಹೊರೆಯಾಗಿವೆ. ಹೀಗಾಗಿ ಸಮತೋಲನ ಆಹಾರದತ್ತ ಮುಖ ಮಾಡುವ ಅಗತ್ಯವಿದೆ.
- 2024ರಲ್ಲಿ ಭಾರತಕ್ಕೆ ಸಂದಾಯವಾಗಿದ್ದು ಶೇ 3.7ರ ದರದಲ್ಲಿ 124 ಶತಕೋಟಿ ಅಮೆರಿಕನ್ ಡಾಲರ್ನಷ್ಟು. 2025ರಲ್ಲಿ ಇದು 129 ಶತಕೋಟಿ ಅಮೆರಿಕನ್ ಡಾಲರ್ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು 2023–24ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.











Average Rating